ಗಜಲ್

ಮಾವು ಬೇವಿನ ತೋರಣವಿರಲಿ ಬಾಳ ಹಾದಿಗೆ
ರಣ ರಣ ಬಿಸಿಲು ನೆರಳಿರಲಿ ದುಡಿಯುವಾ ಜೀವಿಗೆ

ಪ್ರಕೃತಿ ಪುರುಷರ ಮಿಲನಕೆ ಸುಮ ಬೀರಿದೆ ಪರಿಮಳ
ಪಿಕದ ಇಂಪಾದ ಗಾನವಿರಲಿ ನೊಂದ ಮನಸಿಗೆ

ಜಗದ ವನವು ಚಿಗುರಿ ಬಳಕುತ ಮಿಡಿ ಉಡಿ ತುಂಬಿದೆ
ಬನದಲಿ ಕುಸುಮ ಕಂಪಿರಲಿ ಬೇಸರದ. ಉಸಿರಿಗೆ

ಚೈತ್ರವು ಬರಿದಾದ ಗಿಡ ಮರಕೆ ಉಡಿಸಿದೆ ಹಸಿರು
ವಸಂತನ ಆಗಮನ ಇರಲಿ ಅಗಲಿದ ವಿರಹಿಗೆ

ಮೂಡಣವು ರಂಗೇರಿ ರವಿ ಕಿರಣ ತಬ್ಬಿದೆ ಭುವಿ
ಯುಗಾದಿ ಚೈತನ್ಯ ನೀಡಲಿ ಪ್ರಭೆಯ. ಬದುಕಿಗೆ

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter