‘ಆನಂದ ಕಂದ’ ಅವರ ಸಾಹಿತ್ಯವನ್ನು ಕುರಿತ ಲೇಖನಗಳಿಗೆ ಆಹ್ವಾನ

ಕನ್ನಡದ ಹರಿಕಾರ ಯುಗದ ಮಹತ್ವದ ಲೇಖಕರಾದ ಆನಂದಕಂದ (ಬೆಟಗೇರಿ ಕೃಷ್ಣಶರ್ಮ) (೧೯೦೦-೧೯೮೨) ಅವರ ೧೨೫ನೇ ಜಯಂತಿಯ ಅಂಗವಾಗಿ ಅವರ ಸಾಹಿತ್ಯವನ್ನು ಕುರಿತ ಲೇಖನಗಳನ್ನು ಸಂಪಾದಿಸಿ ಪ್ರಕಟಿಸುವ ಉದ್ದೇಶದಿಂದ ಅವರ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಜಾನಪದ, ಸಂಶೋಧನೆ ಮತ್ತು ಪತ್ರಿಕೋದ್ಯಮದ ಕುರಿತ ಲೇಖನಗಳನ್ನು ಆಹ್ವಾನಿಸಲಾಗಿದೆ.

    ಯುವ ವಿಮರ್ಶಕರಾದ ವಿಕಾಸ ಹೊಸಮನಿ ಮತ್ತು ಡಾ. ಸುಭಾಷ್ ಪಟ್ಟಾಜೆ ಅವರ ಸಂಪಾದಕತ್ವದಲ್ಲಿ ಈ ಕೃತಿಯು ೨೦೨೪ರಲ್ಲಿ ಹೊರಬರಲಿದೆ. ಕನ್ನಡದ ಲೇಖಕ/ಕಿಯರು, ಸಂಶೋಧನಾರ್ಥಿಗಳು ಮತ್ತು ಉದಯೋನ್ಮುಖ ಪ್ರತಿಭೆಗಳು ತಮ್ಮ ಲೇಖನಗಳನ್ನು ೨೦೨೪ರ ಮಾರ್ಚ್ ೩೧ನೇ ತಾರೀಕಿಗೆ ಮುಂಚಿತವಾಗಿ ಕಳುಹಿಸಬೇಕು. ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ. ಹೆಚ್ಚಿನ ಮಾಹಿತಿಗಾಗಿ ವಿಕಾಸ ಹೊಸಮನಿ (Whatsapp: 9110687473) ಅಥವಾ ಡಾ. ಸುಭಾಷ್ ಪಟ್ಟಾಜೆ ( Whatsapp: 9645081966) ಅವರನ್ನು ಸಂಪರ್ಕಿಸಿ.

    ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

    ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

    Leave a Comment

    Your email address will not be published. Required fields are marked *

    ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

    Recent Posts

    Sign up for our Newsletter