ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ -ವೃತ್ತಿಯಿಂದ ಉಪನ್ಯಾಸಕಿ,
ಪ್ರಕಟಿತ ಕೃತಿಗಳು:
ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ [ಅಂಕಣ ಬರಹ ಕೃತಿ]
ಪ್ರಶಸ್ತಿಗಳು:
“ ಏಣಿ” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ,
‘ಬರ್ಫದ ಬೆಂಕಿ ‘ಕವನ ಸಂಕಲನಕ್ಕೆ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ 2019, ಹಾಗೂ ಕರ್ನಾಟಕ
ಲೇಖಕಿಯರ ಸಂಘ, ಬೆಂಗಳೂರು ಕೊಡುವ ಗೀತಾದೇಸಾಯಿ ಕಾವ್ಯ ಪ್ರಶಸ್ತಿ ಲಭಿಸಿದೆ.
“ಮೌನದೊಳಗೊಂದು ಅಂತರ್ಧಾನ” ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬಯಿ ಕೊಡ ಮಾಡುವ ಶ್ರೀಮತಿ ಸುಶೀಲಮ್ಮಕಥಾ ಪ್ರಶಸ್ತಿ- 2019 ಲಭಿಸಿದೆ.
ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ 2018 , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋರ್ನಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ 2018, ಇತ್ಯಾದಿ ಬಂದಿರುತ್ತವೆ.
All Posts