ನಿರ್ಭಯಾ ಮೊದಲಲ್ಲ, ಮನೀಷಾ ಕೊನೆಯಲ್ಲ.

ಒಡೆದ ಬಳೆಚೂರಿನ ಒದ್ದಾಟದ ಕೆಂಪು
ಗೆರೆಗಳು ಚಲ್ಲಾಪಿಲ್ಲಿ ಹಾದಿತುಂಬ
ಕಾಲ ಸರಪಳಿಯ ಕಳಚಿದ ಗೆಜ್ಜೆಯ
ಆಕ್ರಂದನ ಊರುಕೇರಿಯ ತುಂಬ

ಕುಪ್ಪುಸದ ಕಿತ್ತ ಗುಂಡಿಗಳ ಗಾಲಿ
ಅಚ್ಚುಗಳ ಹಾಸು ಅಂಗಳದ ತುಂಬ
ಎಗರಿದ ಸೆರಗು ಒರಲಿದ ಶೋಕ
ಗೀತೆಗಳ ಅಪಸ್ವರ ಗಾಳಿತುಂಬ

ಸೆಳ್ಳುಗುರ ದಾಳಿಗೆ ನೀಲಿಗಟ್ಟಿದ
ಕೆನ್ನೆಯ ಛಾಯೆ ಆಗಸದ ತುಂಬ
ಹರಿದ ತುಟಿಪಕಳೆಯಲಿ ಕೈದಾದ
ಬಿಕ್ಕುಗಳು ಕಡಲ ತುಂಬ

ಕಣ್ಣನೀರಿನಲಿ ನೆಂದ ಸಿರಿಮುಡಿಯ
ವಿಲವಿಲ ಒದ್ದಾಟ ಧೂಳಿನ ತುಂಬ
ತೆರೆದ ಬೆತ್ತಲೆಯ ನೋವಿನ ಬಟ್ಟೆ
ಮುಸುಕು ಜಗದ ತುಂಬ

ಕಾಣಲಿಲ್ಲವೆ ಮೊಳಕೆಗೆ ಮಣ್ಣಾದ ಗರ್ಭ
ಉಸಿರಿಗೆ ದಾರಿಯಾದ ಯೋನಿ
ಹಾಲೂಡಿಸಿದ ಮೊಲೆಗಳು
ಗುರಾಣಿಯಾಗಿದ್ದ ತೋಳುಗಳು?

ಬಗೆದು ಮುರಿದೊಡಲ ಯಾತನೆ
ಹಿಮದ ಕಲ್ಲಾಗಿ ಎದೆಯ ಮೇಲೆ
ಹೊಸಕಿದ ಹೂವಿನ ರಕ್ತ ಸಿಡಿಗುಂಡಾಗಿ
ನಾಟಲಿಲ್ಲವೆ ನಿನ್ನ ಆತ್ಮದ ತುಂಬ?

ಎಷ್ಟು ನಿರ್ಭಯಾರೊ
ಎಷ್ಟು ಮನೀಷಾರೊ
ಅಂದಿನಿಂದಿನ ವರೆಗೆ ಲೆಕ್ಕವಿದೆಯೆ?
ಮೋಜು ಮಸ್ತಿ ಕಾಮ ಪಿಪಾಸೆಗೆ
ಧಿಕ್ಕಾರ ನಿನ್ನ ರತಿಗೆ
ಆತ್ಮರತಿಗೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

9 thoughts on “ನಿರ್ಭಯಾ ಮೊದಲಲ್ಲ, ಮನೀಷಾ ಕೊನೆಯಲ್ಲ.”

  1. ಧರ್ಮಾನಂದ ಶಿರ್ವ

    ಅತ್ಯಾಚಾರದ ವಿರುದ್ಧ ಅಕ್ಷರಗಳು ನೋವು ತುಂಬಿ ಹನಿಹನಿಯಾಗಿ ತೊಟ್ಟಿಕ್ಕುತ್ತಿರುವ ಭಾವಪೂರ್ಣ ಕವನ…

  2. Purushothama Bilimale

    ಪರಿಸ್ಥಿತಿಯ ಭೀಕರತೆಯನ್ನು ಕವಿತೆ ಮರುರೂಪಿಸಿದೆ.

    1. ಶ್ವೇತಾ ನರಗುಂದ

      ಮತ್ತೆ ಮತ್ತೆ ಇಂಥ ಘಟನೆ ಗಳು ಜರುಗುತ್ತಲೇ ಇರುವುದು ಶೋಚನೀಯ.

      1. ಶ್ವೇತಾ ನರಗುಂದ

        ರೋಗಗ್ರಸ್ತ ಮನಸ್ಸುಗಳಿಗೆ ಯಾವ ಮದ್ದು?

    1. ಶ್ವೇತಾ ನರಗುಂದ

      ನಿಜ. ಅಸಹಾಯಕತೆಯಿಂದ ಮನಸ್ಸು ಪಾತಾಳಕ್ಕಿಳಿಯುತ್ತದೆ.

  3. ಡಾ ರೇಣುಕಾ ಕಠಾರಿ

    ತುಂಬಾ ಅರ್ಥಬರಿತ ಸಾಲುಗಳು ಮನ ಮಿಡಿಯಿತು ಅಭಿನಂದನೆಗಳು ಮೇಡಂ

    1. ಶ್ವೇತಾ ನರಗುಂದ

      ವಿಕೃತ ಮನಸ್ಸಿನ ಈ ಅಪರಾಧಿಗಳಿಂದ ಸಾಮಾಜಿಕ ಸ್ವಾಸ್ಥ್ಯವೇ ಹದಗೆಟ್ಟು ಹೋಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai